‘ಉತ್ತರಕಾಂಡ’ – ಸೀತೆಯ ದೃಷ್ಟಿಯಲ್ಲಿ ರಾಮಾಯಣ

You may also like...

7 Responses

  1. ಕೀರ್ತಿ says:

    ವಾಲ್ಮೀಕಿ ಯಜ್ಞದಲ್ಲಿ ಅಲ್ಲಾ,
    ವಿಶ್ವಾಮಿತ್ರನ ಯಜ್ಞ ಮಾಡುವಾಗ ಹೋರಾಡಿದವನು ರಾಮ .
    ವಾಲ್ಮೀಕಿ ಋಷಿಯ ಪ್ರಕಾರ : ರಾಮನು ಸೀತೆಯ ಕೊಂದು ಬಿಡು ಅಥವಾ ಕಾಡಿಗೆ ಹಟ್ಟಿ ಬಂದು ಬಿಡು ಎನ್ನುತ್ತಾನೆ .
    ಆದರೆ,
    ಲಕ್ಷ್ಮಣ ಸೀತೆಯನ್ನು ಗೌರವಪೂರಕವಾಗಿ ಕೀಡಿನ ಮಧ್ಯೆ ವನದೇವಿಯ ಪ್ರಾರ್ಥಿಸಿ ಅವಳನ್ನು ಅಲ್ಲೇ ಬಿಟ್ಟು ಬರುತ್ತಾನೆ.

    ಚೆಂದದ ಲೇಖನ .

    —-ಪಿ.ಕೀರ್ತಿ

  2. ಬರಹ ತುಂಬಾ ಚೆನ್ನಾಗಿದೆ. ನನ್ನ ಪ್ರತಿಕ್ರಿಯೆಯನ್ನು ಭೈರಪ್ಪನವರ ಉತ್ತರಕಾಂಡಕ್ಕಷ್ಟೇ ಸೀಮಿತಗೊಳಿಸದೆ ,ಅದರಾಚೆಗೂ ರಾಮ-ಸೀತಾಯಣದ ಬಗ್ಗೆ ಒಂದೆರಡು ಅನಿಸಿಕೆ ಹೇಳುತ್ತೇನೆ.
    ‘ಸೀತಾಯಣ’ವನ್ನು ಹೀಗೂ ಅರ್ಥೈಸಬಹುದು.ರಾಮ ಸೀತೆಯನ್ನು ಬಿಟ್ಟದ್ದೋ, ಅಥವಾ ಸೀತೆಯೇ ರಾಮನನ್ನು ಬಿಟ್ಟದ್ದೋ? ರಾವಣನ ವಶದಲ್ಲಿದ್ದಂಥ ಸೀತೆ ಅವನ ವಧೆಯಾದ ಮೇಲೆ ರಾಮನ ಬಳಿ ವಾಪಸ್ಸು ಬರುವಾಗ ತಾನು ಪವಿತ್ರಳು ಎಂಬುದನ್ನು ಸಾಬೀತುಪಡಿಸಲು ಅಗ್ನಿಪ್ರವೇಶ ಮಾಡಬೇಕೆನ್ನುವ ಸಂದರ್ಭ ಎದುರಾದಾಗಲೇ ಮಾನಸಿಕವಾಗಿ ರಾಮನನ್ನು ತ್ಯಜಿಸಿಯಾಗಿತ್ತು.ತ್ರಿಕರಣಪೂರ್ವಕವಾಗಿ ತಾನು ಪ್ರೇಮಿಸಿ,ಪೂಜಿಸಿದ ರಾಮ ನನ್ನನ್ನು ಅನುಮಾನಿಸಿದ ಎಂಬ ಭಾವವೇ ಜಾನಕಿಯನ್ನು ಘಾಸಿಗೊಳಿಸಿತ್ತು.ಅನುಮಾನವೆಂಬ ರೋಗ ಒಮ್ಮೆ ಮನಸ್ಸಿನೊಳಗೆ ಹೊಕ್ಕ ಮೇಲೆ ಅರ್ಬುದವಾಗಿ ಬೆಳೆದು ತಮ್ಮಿಬ್ಬರನ್ನು ಮುಂದೊಂದು ದಿನ ಬೇರ್ಪಡಿಸಬಹುದು ಎಂಬ ಮುಂದಾಲೋಚನೆ ಭೂಜಾತೆಗೆ ಅಂದು ಒಡಮೂಡಿ ಪುಂಡರೀಕಾಕ್ಷ ರಘುವರನನ್ನು ಮಾನಸಿಕವಾಗಿ ತ್ಯಜಿಸಿಯಾಗಿತ್ತವಳು.ಮುಂದೊಂದು ದಿನ ಭೌತಿಕವಾಗಿ ರಾಮನನ್ನು ಬಿಡಲು ಆ ಸಮಯದಿಂದಲೇ ಸಿದ್ಧತೆ ಆರಂಭಿಸಿದ್ದಳೋ ಏನೋ.ಬಹುಷಃ ಅದಕ್ಕೇ ಇರಬೇಕು ತನ್ನನ್ನು ಕಾಡಿನಲ್ಲಿ ಲಕ್ಷ್ಮಣ ಬಿಟ್ಟಾಗ ಅವಳು ಹೇಳಿದ್ದು “ಕರುಣಾಳು ರಾಘವನಲ್ಲಿ ತಪ್ಪಿಲ್ಲ”

    ಸೀತೆಯಷ್ಟೇ ಮೇಲ್ಪಂಕ್ತಿಯಲ್ಲಿ ನಿಲ್ಲುವ ಇನ್ನೊಂದು ಜೀವ ಊರ್ಮಿಳೆ.ತನ್ನ ಯಾವ ತಪ್ಪೂ ಇಲ್ಲದೆ ಹದಿನಾಲ್ಕು ವರ್ಷಗಳ ಕಾಲ ಅಕ್ಷರಶಃ ಸನ್ಯಾಸಿನಿಯ ಹಾಗೇ ಬದುಕಿದಳು.ಅರಮನೆಯ ಸಕಲ ಸಂಪತ್ತುಗಳಿದ್ದೂ,ಕಣ್ಣು ಕುಕ್ಕುವ ವಸ್ರ್ತಾಭರಣಗಳಿದ್ದೂ,ನಾಸಿಕವನ್ನು ಕೆಣಕುವ ಸುವಾಸನಾಯುಕ್ತವಾದ ಕಂಪನ್ನು ಸೂಸುವ ಷಡ್ರಸೋಪೇತ ಭಕ್ಷ್ಯ ಭೋಜ್ಯಗಳಿದ್ದೂ ಯಾವುದನ್ನೂ ಹೊಂದಲಾಗದ,ಅನುಭವಿಸಲಾಗದ ಸ್ಥಿತಿ ಆಕೆಯದು.ಪತಿಯ ಅನುಪಸ್ಥಿತಿಯಲ್ಲಿಯೂ ತನ್ನ ಇನ್ನಿಬ್ಬರು ತಂಗಿಯಂದಿರಾದ ಮಾಂಡೋವಿ ಮತ್ತು ಶ್ರುತಕೀರ್ತಿಯರಂತೆ ಅರಮನೆಯ ಸುಖಾಭೋಗಗಳನ್ನು ಅನುಭವಿಸುತ್ತ ಬದುಕಿದ್ದರೆ ಯಾರೂ ಅವಳನ್ನು ಪ್ರಶ್ನಿಸುತ್ತಿರಲಿಲ್ಲ.ಆದರೆ ಕಾಡಿನಲ್ಲಿ ನಾರುಮಡಿಯುಟ್ಟು ಅರೆಹೊಟ್ಟೆಯಲ್ಲಿ ತನ್ನ ಗಂಡ ಜೀವಿಸುತ್ತಿರುವಾಗ ತಾನೂ ಬ್ರಹ್ಮಚರ್ಯೆಯನ್ನು ಪಾಲಿಸಲು ಮನಮಾಡಿದಳು.ಪತಿಯನ್ನು ಕಾಡಿಗೆ ಹೋಗದಂತೆ ಹಠ ಮಾಡಿ ತಡೆಯಬಹುದಿತ್ತು.ಅದಾಗದಿದ್ದರೆ ಸೀತೆಯಂತೆ ತಾನೂ ನಿನ್ನನ್ನು ಅನುಸರಿಸುತ್ತೇನೆಂದು ಲಕ್ಷ್ಮಣನನ್ನು ಗೋಳುಹೊಯ್ಯಬಹುದಾಗಿತ್ತು.ಊರ್ಮಿಳೆ ಅದ್ಯಾವುದೂ ಮಾಡಲಿಲ್ಲ.ಅದಕ್ಕೇ ಏನೋ ನನಗೆ ರಾಮಾಯಣದಲ್ಲಿ ಮತ್ತು ‘ಉತ್ತರಕಾಂಡ’ದಲ್ಲಿ ಸೀತೆಯಷ್ಟೇ ಊರ್ಮಿಳೆಯೂ ಇಷ್ಟವಾಗುತ್ತಾಳೆ.

    ನಿಜಕ್ಕಾದರೆ ತನ್ನನ್ನು ಅತಿಯಾಗಿ ಪ್ರೀತಿಸುವ ತಂದೆ-ತಾಯಿ,ಪತ್ನಿ,ತಮ್ಮಂದಿರು,ಪ್ರಜಾವರ್ಗ ಇವನ್ನೆಲ್ಲ ಬಿಡುವುದು ರಾಮನಿಗೆ ಸಾಧ್ಯವಿರಲಿಲ್ಲ.ಆದ್ದರಿಂದಲೇ ಇರಬೇಕು ರಾಮನ ಕಾಲವಾಗುವುದಕ್ಕೂ ಮುಂಚೆಯೇ ಜಾನಕಿ ಭೂಗರ್ಭವನ್ನು ಸೇರಿಕೊಂಡಳು.ಲಕ್ಷ್ಮಣ ಸರಯೂ ನದಿಯಲ್ಲಿ ರಾಮನಿಗಿಂತ ಮೊದಲೇ ಲೀನವಾಗಿ ಹೋದ.( ‘ಉತ್ತರಕಾಂಡ’ದಲ್ಲಿ ರಾಮನ ಆಡಳಿತವನ್ನು ಧಿಕ್ಕರಿಸಿ ಲಕ್ಷ್ಮಣ ತನ್ನದೇ ಪ್ರತ್ಯೇಕ ರಾಜ್ಯವನ್ನು ಸಣ್ಣದಾಗಿ ಸ್ಥಾಪಿಸಿ ಬದುಕುವುದನ್ನು ಗಮನಿಸಬಹುದು.ಸೂಚ್ಯವಾಗಿ ನೋಡಿದರೆ ರಾಮನನ್ನು ಲಕ್ಷ್ಮಣನೇ ತ್ಯಜಿಸಿದ ಎಂಬ ಅರ್ಥ ಬರಬಹುದಲ್ಲವೇ?). ರಾಮ ವನವಾಸ ಮುಗಿಸಿ ಅಯೋಧ್ಯೆಗೆ ಬರುವ ಹೊತ್ತಿಗೆ ತನ್ನ ಪ್ರೀತಿಪಾತ್ರ ಅಪ್ಪ ದಶರಥನೂ ರಾಮನನ್ನು ಬಿಟ್ಟು ಹೋಗಿದ್ದ.ಹಾಗಾಗಿ ತಾನು ಇಷ್ಟಪಟ್ಟವರನ್ನು ತ್ಯಜಿಸಲು ರಾಮನಿಗಾಗಲಿಲ್ಲ.ಅವರೇ ಇವನನ್ನು ತ್ಯಜಿಸಿದರು.

    ‘ನನ್ನ ಅಭಿಪ್ರಾಯ’ ಎಂಬ ಉಪಶೀರ್ಷಿಕೆಯಡಿ ‘ರಾಮನನ್ನು ಹೃದಯಹೀನನಂತೆ ಬಿಂಬಿಸಿರುವುದು ಇಷ್ಟವಾಗಲಿಲ್ಲ’ ಎಂದು ಬರೆದಿದ್ದೀರಿ.ನಿಮ್ಮ ಅಭಿಪ್ರಾಯವನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ.ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀಹರಿಯ ಅಂಶಸ್ವರೂಪನಾದ ಮರ್ಯಾದಾಪುರುಷೋತ್ತಮ ರಾಮನನ್ನು ದೇವರಾಗಿ ಪೂಜಿಸುವ ನಮಗೆ ಭೈರಪ್ಪನವರು ರಾಮನ ಬಗ್ಗೆ ದಾಖಲಿಸಿದ ವಿವರಗಳನ್ನು ಒಪ್ಪಿಕೊಳ್ಳುವುದು ತುಸು ಕಷ್ಟವೇ ಸರಿ.ಆದರೆ ಎಲ್ಲ ಮನುಷ್ಯರಂತೆ ರಾಮ ಸೀತೆಯೂ ಈ ಭೂಮಿಯಲ್ಲಿ ಬದುಕಿದ್ದಾರೆ ಎಂದಾದರೆ ಮನುಷ್ಯರಂತೆ ಜೀವನದಲ್ಲಿ ಅವರಿಗೆ ಕಷ್ಟಗಳು ಬಂದಾಗ ರಾಮ ಸೀತೆಯರು ಏನು ಮಾಡುತ್ತಿದ್ದರು ಎಂಬುದನ್ನು ಮಥಿಸುವುದೂ ‘ಉತ್ತರಕಾಂಡ’ದ ಉದ್ದೇಶಗಳಲ್ಲೊಂದು ಎಂದು ಕಾದಂಬರಿ ಬಿಡುಗಡೆಯಾದ ಸಂದರ್ಭದಲ್ಲಿ ಭೈರಪ್ಪನವರು ಸೂರ್ಯಪ್ರಕಾಶ್ ಪಂಡಿತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಯೂಟ್ಯೂಬಿನಲ್ಲಿರುವ ಆ ಮಾತುಕಥೆಯ ಲಿಂಕನ್ನು ಇಲ್ಲಿ ಹಾಕಿದ್ದೇನೆ. https://www.youtube.com/watch?v=el1TOk6jg-o ಉತ್ತರಕಾಂಡದ ಸೀತಾಯಣಕ್ಕೆ ಪೂರಕವಾಗಿ ಆ ಸಂದರ್ಶನವನ್ನೂ ಆಲಿಸಿ.ಸೀತೆಯ ಜೀವನದ ಇನ್ನೂ ಹಲವು ಆಯಾಮಗಳು ಚಿಂತನೆಗೆ ನಿಲುಕಬಹುದು..

    ಕನ್ನಡ ಸಾಹಿತ್ಯವನ್ನು ಓದುವುದಲ್ಲದೇ ಅದರ ಬಗ್ಗೆ ನಾಲ್ಕು ಮಾತು ಬರೆದು ಇತರರನ್ನೂ ಓದಲು ಪ್ರೇರೇಪಿಸುವುದಕ್ಕೆ ನೀವು ಅಭಿನಂದನಾರ್ಹರು.ಹೀಗೇ ಬರೆಯುತ್ತಿರಿ..

    -ಲಕ್ಷ್ಮೀಶ ಜೆ.ಹೆಗಡೆ

  3. ದಿವ್ಯ says:

    ಕ್ಷಮಿಸಿ
    ಭೈರಪ್ಪನವರ ಬಗ್ಗೆ ಪುಸ್ತಕದ ಬಗ್ಗೆ ಬರೆಯಲು ನಾನು ಎಂದೆಂದಿಗೂ ಚಿಕ್ಕವಳೇ.
    ಆದರೆ uttarakanda ಓದಿದ ಮೇಲೆ ನನಗೆ ತುಂಬಾ ನೆಮ್ಮದಿ ಸಿಕ್ಕಿದೆ.
    ಬುದ್ಧಿ ತಿಳಿದoದಿನಿಂದಲೂ ಸೀತೆ ಗೆ ಆದ ಅನ್ಯಾಯ ಮನಸ್ಸನ್ನು suduttale ಇತ್ತು, ಅದೆಷ್ಟು ಬಾರಿ seethe ಯನ್ನು ನೆನೆದು attiddino ಗೊತ್ತಿಲ್ಲ. ಇಡೀ ಲೋಕಕ್ಕೆ ರಾಮ ಆದರ್ಶ ವ್ಯಕ್ತಿ, ಆದರೆ ಸೀತೆಯ ವಿಷಯದಲ್ಲಿ ಆತ ನಡೆದುಕೊಂdiruva ರೀತಿ ಅಕ್ಷಮ್ಯ.
    ಈ ಪುಸ್ತಕ ಬರೆದು ನನ್ನ ಮನಸ್ಸಿಗೆ ತುಂಬಾ ಶಾಂತಿ ತಂದುಕೊಟ್ಟ ಭೈರಪ್ಪನವrige ನಾನು ಎಂದಿಗೂ chiraruni.

  4. ದಿವ್ಯ says:

    ಕ್ಷಮಿಸಿ
    ಭೈರಪ್ಪನವರ ಬಗ್ಗೆ ಪುಸ್ತಕದ ಬಗ್ಗೆ ಬರೆಯಲು ನಾನು ಎಂದೆಂದಿಗೂ ಚಿಕ್ಕವಳೇ.
    ಆದರೆ uttarakanda ಓದಿದ ಮೇಲೆ ನನಗೆ ತುಂಬಾ ನೆಮ್ಮದಿ ಸಿಕ್ಕಿದೆ.
    ಬುದ್ಧಿ ತಿಳಿದoದಿನಿಂದಲೂ ಸೀತೆ ಗೆ ಆದ ಅನ್ಯಾಯ ಮನಸ್ಸನ್ನು suduttale ಇತ್ತು, ಅದೆಷ್ಟು ಬಾರಿ seethe ಯನ್ನು ನೆನೆದು attiddino ಗೊತ್ತಿಲ್ಲ. ಇಡೀ ಲೋಕಕ್ಕೆ ರಾಮ ಆದರ್ಶ ವ್ಯಕ್ತಿ, ಆದರೆ ಸೀತೆಯ ವಿಷಯದಲ್ಲಿ ಆತ ನಡೆದುಕೊಂdiruva ರೀತಿ ಅಕ್ಷಮ್ಯ.
    ಈ ಪುಸ್ತಕ ಬರೆದು ನನ್ನ ಮನಸ್ಸಿಗೆ ತುಂಬಾ ಶಾಂತಿ ತಂದುಕೊಟ್ಟ ಭೈರಪ್ಪನವrige ನಾನು ಎಂದಿಗೂ chiraruni.

  5. ಮಾಲೂರು ವೆಂಕಟಸ್ವಾಮಿ says:

    ‘ರಾಮನ ಧರ್ಮಜ್ಞಾನದ ಬಗ್ಗೆ ಅನುಮಾನವಾಗುತ್ತದೆ.’ ಎಂಬ ಮಾತಿನೊಂದಿಗೆ ಮುಕ್ತಾಯವಾಗುವ ಉತ್ತರಕಾಂಡದ ಬಗೆಗಿನ ಸಂಜೋತ ಪುರೋಹಿತ್ ಅವರ ಲೇಖನ ಬೈರಪ್ಪನವರು ತಮ್ಮ ಕಾದಂಬರಿಯಿಂದ ಓದುಗರು ರಾಮಾಯಣದ ಬಗ್ಗೆ ವಿಭಿನ್ನವಾಗಿ ಚಿಂತಿಸಲು ಪ್ರೇರೇಪಿಸಿದ್ದಾರೆ ಎಂಬುದಕ್ಕೆ ಪುರಾವೆಯಾಗಿದೆ. ಉತ್ತರಕಾಂಡದ ಬಗ್ಗೆ ಸಂಜೋತ ಪುರೋಹಿತ್ ಅವರ ವಿಚಾರಗಳು ಮನನೀಯವಾಗಿವೆ.

Copy Protected by Chetan's WP-Copyprotect.